ಗುಬ್ಬಿ : ತಾಲೂಕಿನ ಚಂದ್ರಶೇಖರಪುರ ಗ್ರಾಮದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವನ್ನು ತೊರೆದು ಕೃಷ್ಣಪ್ಪ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಯಾದರು.
ಇದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ನನ್ನ ಕಾಲದಲ್ಲಿ ಸಿ ಎಸ್ ಪುರದಲ್ಲಿ ಅಭಿವೃದ್ಧಿ ಕೆಲಸ ವನ್ನು ಮಾಡಿದ್ದೇನೆ ಈಗ ಗೆದಿರುವ ಶಾಸಕರು ಪ್ರತಿ ಕೆಲಸ ದಲ್ಲಿ ಕಮಿಷನ್ ತೆಗೆದುಕೊಂಡು ನಾಟಕ ಮಾಡುತ್ತಿದ್ದಾರೆ ಅಷ್ಟೇ ಕುಮಾರ್ ಸ್ವಾಮಿ ಮಾಡಿರುವ ಪಂಚರತ್ನ ಯೋಜನೆ ದೂರದ ದೃಷ್ಟಿ ಇಟ್ಟು ಕೊಂಡು ಮಾಡಿರುವ ಯೋಜನೇ ಇದ್ರಿಂದ ಪ್ರತಿ ಹಳ್ಳಿಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ ಎಂದು ದೂರಿದರು.
ಮುಖಂಡ ರಮೇಶ್ ಮಾತನಾಡಿ ಎಂ ಟಿ ಕೃಷ್ಣಪ್ಪ ನವರು ನೆರವಾದಿ ಅವರಿಗೇರುವ ಗಟ್ಸ್ ಯಾರಿಗೂ ಇಲ್ಲ ಹೇಗೆಲ್ಲ ಕೆಲಸ ಮಾಡಿಸಬೇಕು ಅನುದಾನ ಹೇಗೆಲ್ಲ ತರ ಬಹುದು ಎಂದು ತಿಳಿದಿರುವ ನಾಯಕ ಅವರು ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿಕಾರ್ಯಕ್ರಮ ದಲ್ಲಿ ಜೆಡಿಎಸ್ ಮುಖಂಡ ಬಾಣಸಂದ್ರ ರಮೇಶ್.ಜೆಡಿಎಸ್ ಹೋಬಳಿ ಅಧ್ಯಕ್ಷ ಬೋರಪ್ಪನಹಳ್ಳಿ ಕುಮಾರಣ್ಣ. ಗ್ರಾಮ ಪಂಚಾಯಿತಿ ಸದಸ್ಯ. ಈಶ್ವರ್ ಗೌಡ.ನಾಗರಾಜ್ ಬೆನಕನಗೊಂದಿ. ಬಸವರಾಜು ಮಗ್ಗಿಕುಪ್ಪೆ.ಎಸ್ಸಿ ಘಟಕದ ಗಿರೀಶ್.ನವೀನ್ ಕುಮಾರ್. ಮಂಜುನಾಥ್ ಕಲ್ಲೂರು ಇತರರು ಹಾಜರಿದ್ದರು.
