ಗುಬ್ಬಿ : ಅಂತಾಪುರ ಗ್ರಾಮದ ರಸ್ತೆ ಕಾಮಗಾರಿಗೆ ಶಾಸಕ ಶ್ರೀನಿವಾಸ್ ಗುದ್ದಲಿ ಪೂಜೆ ನೆರವೇರಿಸಿದರು.
ತಾಲೂಕಿನ ಅಂತಾಪುರ ಮೂಲಕ ಹಾದು ಹೋಗುವ ರಸ್ತೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರ ಅವರು ಮಧುಗಿರಿಯಲ್ಲಿ ಸಂಸದ ಜಿ ಎಸ್ ಬಸವರಾಜು ಮಾತನಾಡುವುದು ನೋಡಿದಾಗ ಖಂಡಿತವಾಗಿ ಅವರಿಗೆ ಅರಳು ಮರಳು ಆಗಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ಕಾರ್ಯ ಕರ್ತರು ಹಾಗೂ ಮುಖಂಡರ ಜೊತೆ ಮಾತನಾಡಿ ಯಾವ ಪಕ್ಷಕ್ಕೆ ಸೇರಬೇಕು ಎನ್ನುವುದನ್ನು ನಿರ್ಧರಿಸುತ್ತೇನೆ ರಾಜೀನಾಮೆ ನೀಡಿದ ಬಳಿಕವೇ ನಾನು ಇನ್ನೊಂದು ಪಕ್ಷಕ್ಕೆ ಹೋಗಲು ಸಾಧ್ಯ ಹಾಗಾಗಿ ನನ್ನ ಅಭಿಮಾನಿ ಗಳು ಕಾಂಗ್ರೆಸ್ ಪಕ್ಷಕೆ ಸೇರಿ ಎನ್ನುತ್ತಾರೆ ಅದರೇ ನಾನು ನನ್ನ ನಿರ್ಧಾರ ತಿಳಿಸಿಲ್ಲ ಎಂದರು
ಇದೆ ಸಂದರ್ಭದಲ್ಲಿ ಅಧ್ಯಕ್ಷ ಸದಸ್ಯರು ಮುಖಂಡರು ವಾಸಣ್ಣ ಅಭಿಮಾನಿಗಳು ಹಾಜರಿದ್ದರು
