ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ನೂತನ ಅಧ್ಯಕ್ಷರಾಗಿ ತುರುವೇಕೆರೆ ವಿಧಾನ ಸಭಾ ಕ್ಷೇತ್ರದ ಶಾಸಕ ಮಸಾಲಜಯರಾಮ್ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ಎಂ.ಎಂ.ಎಲ್. ಅದ್ಯಕ್ಷ ಮಸಾಲಜಯರಾಮ್. ನನ್ನ ಮೇಲೆ ವಿಶ್ವಾಸವಿರಿಸಿ ಎಂ.ಎಂ. ಎಲ್. ಅಧ್ಯಕ್ಷರಾಗಿ ನೇಮಕ ಮಾಡಿದ ಮುಖ್ಯ ಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರಿಗೆ ವಿಶೇಷ ಕೃತಜ್ಞತೆ ಸಮರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ಎಂ.ಎಂ.ಎಲ್. ಅಭಿವೃದ್ದಿಗೆ ಶ್ರಮಿಸುತ್ತೇನೆ. ಮುಂದೆ ಶಾಸಕನಾಗಿ ಮತ್ತೆ ಗೆಲುವು ಸಾಧಿಸಿ ಪಕ್ಷ ಹಾಗೂ ಕ್ಷೇತ್ರದ ಗೌರವ ಎತ್ತಿ ಹಿಡಿಯುತ್ತೇನೆ ಎಂದರು.
