ಕಾಮಗಾರಿ ಮುಗಿದರೂ ಹಣ ನೀಡುವಲ್ಲಿ ಸರ್ಕಾರ ವಿಳಂಬ ಗುತ್ತಿಗೆದಾರರ ಆತ್ಮಹತ್ಯೆಗೆ ಕಾರಣವಾಗಿದೆ : ಶಾಸಕ ಎಸ್ ಆರ್ ಶ್ರೀನಿವಾಸ್



ಗುಬ್ಬಿ :ಸರಕಾರ ಕೆಲಸ ಮಾಡಿರುವ ಗುತ್ತಿಗೆದಾರರಿಗೆ ಹಣ ಕಾಲ ಕಾಲಕ್ಕೆ ಪಾವತಿಸದೆ ಹೋದರೆ ಆತ್ಮಹತ್ಯೆ ಮಾಡಿಕೊಳ್ಳು ತ್ತಾರೆ ಎಂದು ಶಾಸಕ ಶ್ರೀನಿವಾಸ್ ಹೇಳಿದರು.

  ತಾಲ್ಲೂಕಿನ ಎಂ ಎಚ್ ಪಟ್ಟಣ ಹಾಗೂ ಸಿಂಗೋನಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು ನಾವು ಹೇಳಿದ್ದೇವೆ ಎಂದು ಗುತ್ತಿಗೆ ದಾರರು ಕೆಲಸ ಮಾಡುತ್ತಾರೆ ಆದರೆ ಹಣ ನೀಡಿಲ್ಲ ಸಾವಿರಾರು ಕೋಟಿ ಅಷ್ಟು ಹಣ ವನ್ನು ಸರ್ಕಾರ ನೀಡಬೇಕಾಗಿದೆ ಇದನ್ನು ಮೊದಲು ಮಾಡಿದರೆ ಕೆಲಸ ಕಾರ್ಯಗಳು ಅಭಿವೃದ್ಧಿ ಕೆಲಸಗಳು ಮಾಡಲು ಸಾಧ್ಯವಾಗುತ್ತದೆ

ಇನ್ನೂ ತಾಲ್ಲೂಕಿನಲ್ಲಿ ಕುಕ್ಕರ್ ಕೊಡುತ್ತಿರುವ ಬಗ್ಗೆ ನನಗೆ ಗೊತ್ತಿಲ್ಲಾ ನನ್ನ ಅಭಿಮಾನಿಗಳು ಕೊಡುತ್ತೀರಾ ಬಹುದುಎಂದ ಅವರು ನಾನು ಚುನಾವಣೆ ಅಂದ್ರೆ ಪ್ರತಿ ಯೂಬ್ಬರ ಮನೆ ಭಾಗಿಲಿಗೆ ಹೋಗುವುದು ಸಹಜ ಅಲ್ಲಿ ಬಿಜೆಪಿ ಕಾಂಗ್ರೆಸ್ ಅನ್ನುವ ಮಾತಿಲ್ಲ ತಾಲೂಕಿನ ಪ್ರತಿ ಮನೆಗೆ ಹೋಗುತ್ತೇನೆ ಎಂದು ತಿಳಿಸಿದರು.
ಇದೆ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಕ್ಷೆ ಸುನೀತಾ ಶಶಿಧರ್, ಮಂಗಳಮ್ಮ, ಉಪಾಧ್ಯಕ್ಷ ಸತ್ಯ ನಾರಾಯಣ ಎರಡು ಗ್ರಾಮ ಪಂಚಾಯತಿ ಸದಸ್ಯರು ಮುಖಂಡರು , ವೆಂಕಟೇಶ್, ನರಸಿಂಹಯ್ಯ, ಗೌಡಣ್ಣ, ನೇಮಣ್ಣ, ದೇವರಾಜು ತೀರ್ಥ ಪ್ರಸಾದ್ ಗುತ್ತಿಗೆದಾರ ಕೇಬಲ್ ರಾಜು ಪಿ ಡಿ ಓ ಸಿದ್ದ ರಾಮಯ್ಯ ಸೇರಿದಂತೆ ಇನ್ನಿತರರರು ಹಾಜರಿದ್ದರು

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು