ಶಿರಾ: ಸರಕಾರಿ ಅಧಿಕಾರಿಗಳು ಎಂದರೆ ಜನರು ಮೂಗು ಮುರಿಯುತ್ತಾರೆ. ತಾತ್ಸಾರ ಮಾಡುತ್ತಾರೆ ಆದರೆ ಅಧಿಕಾರಿ ಬಾಲಕನ ನೆರವಿಗೆ ಮಾನವೀಯತೆ ಮೆರೆದ ತಹಸಿಲ್ದಾರ್ ಮಮತ.
ಹಂದಿಕುಟೆ ಅಗ್ರಹಾರ ಕೆರೆಯಲ್ಲಿ ಮುಳುಗುತ್ತಿದ್ದ ಹೆಣ್ಣುಮಕ್ಕಳನ್ನು ರಕ್ಷಿಸಿ ಜೀವ ಉಳಿಸಿದ್ದ ಶಿರಾ ಕೆ.ಎಸ್.ಆರ್.ಟಿ.ಸಿ ನೌಕರನ ಜೊತೆಯಲ್ಲಿ ಬರಗೂರು ಶಾಲೆಯ ವಿದ್ಯಾರ್ಥಿಯನ್ನು ಕಛೇರಿಯಲ್ಲಿ ಸನ್ಮಾನಿಸಿ ವೈಯಕ್ತಿಕವಾಗಿ 5000/- ರೂಗಳನ್ನು ಬಹುಮಾನವಾಗಿ ನೀಡಿದರು.
ಶಿರಾ ತಹಶೀಲ್ದಾರ್ ಮಮತ.ಎಂರವರು ಸನ್ಮಾನಿಸಿದರು ತಹಶಿಲ್ದಾರ್ ವಿದ್ಯಾರ್ಥಿ ಆರ್.ಸಿ. ಗೌಡ, 8ನೇ ತರಗತಿ, ಬರಗೂರು ಸರ್ಕಾರಿ ಪ್ರೌಢಶಾಲೆ, ರಾಗಲಹಳ್ಳಿ ತಂದೆ ಚಂದ್ರಪ್ಪ, ತಾಯಿ ಅನಿತಮ್ಮ,
ವಿದ್ಯಾರ್ಥಿಯ ಕುಟುಂಬದ ಹಿನ್ನಲೆಯಲ್ಲಿ ತಿಳಿದುಕೊಂಡು ಆಕೆ ವಿಧ್ಯಾಭ್ಯಾಸಕ್ಕಾಗಿ ತಮ್ಮ ಸ್ವಂತ ಖರ್ಚಿನಲ್ಲಿ ವಿದ್ಯಾರ್ಥಿಗೆ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ವರದಿ : ಶಿರಾ ಶ್ರೀಮಂತ್.
