ಕಸಾಪುರ-ಆಂದ್ರ ಗಡಿ ಭಾಗದ ರಸ್ತೆಯ ಕಾಮಗಾರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ಚಾಲನೆ.

 ಮಧುಗಿರಿ : ತಾಲೂಕಿನ ಗಡಿಗ್ರಾಮದ ಕಸಾಪಪುರ-ಆಂದ್ರ ಗಡಿ ಗ್ರಾಮದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 60 ಲಕ್ಷ ಹಣ ನೀಡಲಾಗಿದೆ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.


ತಾಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಸಾಪುರ-ಆಂದ್ರ ಗಡಿ ಭಾಗದ ರಸ್ತೆಯ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗಡಿ ಗ್ರಾಮದ ಗ್ರಾಮೀಣ ರಸ್ತೆಗಳಿಗೆಂದೆ 100 ಕೋಟಿಗೂ ಹೆಚ್ಚು ಹಣ ವ್ಯಯಿಸಲಾಗಿದೆ. ಅದರಂತೆ ಕಸಾಪುರ-ಆಂದ್ರ ಗಡಿವರೆಗೂ 60 ಲಕ್ಷ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಂದು ಚಾಲನೆ ನೀಡಿದ್ದೇನೆ. ಗಡಿ ಗ್ರಾಮಗಳ ರಸ್ತೆಗಳು ಸಧೃಡವಾಗಿದ್ದರೆ ವ್ಯವಹಾರಿಕವಾಗಿ, ವಾಣಿಜ್ಯವಾಗಿ ಗ್ರಾಮಗಳ ಮಧ್ಯೆ ಸಂಪರ್ಕ ಬೆಸೆಯಲಿದ್ದು ಅಭಿವೃದ್ಧಿಯಾಗಲಿದೆ. ಸಣ್ಣ ಪ್ರಮಾಣದ ಉದ್ಯೋಗಗಳು ಸೃಷ್ಟಿಯಾಗಲಿದ್ದು ರಸ್ತೆಗಳ ಅಭಿವೃದ್ಧಿ ಮುಖ್ಯವೆಂದು ತಿಳಿದು ಈ ರಸ್ತೆಗೆ ಕಾಯಕಲ್ಪ ನೀಡುತ್ತಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ತಿಮ್ಮರಾಜು, ಗ್ರಾ.ಪಂ.ಸದಸ್ಯ ರವಿಕುಮಾರ್, ಮುಖಂಡರಾದ ದತ್ತಣ್ಣ, ಮಂಜಣ್ಣ, ನಾಗರಾಜು, ರಂಗನಾಥ್, ಪುಟ್ಟ ಮಲ್ಲೇಶ್, ಗಿರಿ ರಂಗನಾಥ್, ಜಯಣ್ಣ, ಲಕ್ಷ್ಮೀನಾರಾಯಣ್, ಲಕ್ಷ್ಮೀಕಾಂತ್, ರಘುವೀರ್ ಹಾಗೂ ಇತರರು ಜೊತೆಗಿದ್ದರು. 



ವರದಿ ಮದುಗಿರಿ ಬಾಲು ಪಾಣಿಂದ್ರ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Please Select Embedded Mode To Show The Comment System.*

ನವೀನ ಹಳೆಯದು