ಶಿರಾ : ಕಳೆದ ಹನ್ನೆರಡು ವರುಷಗಳಿಂದ ಶಿರಾ ಪಟ್ಟಣದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪವಿತ್ರ ಶಿವರಾತ್ರಿಯ ದಿನದಂದು ಆಚರಿಸಿಕೊಂಡು ಬರುತ್ತಿರುವ ಸಹಸ್ರಲಿಂಗಾರ್ಚನೆ ಕಾರ್ಯಕ್ರಮ. ಜನ ಮಾನಸದ ಭಾಗವಹಿಸುವಿಕೆ ಹಾಗೂ ಒತ್ತಾಸೆಯಿಂದಾಗಿ ಇದೀಗ ಹದಿಮೂರನೆಯ ವರುಷಕ್ಕೆ ಕಾಲಿಟ್ಟಿದೆ.
ಆರಂಭಿಕವಾಗಿ ಶಿರಾ ಪಟ್ಟಣದ ನಾಗರಿಕರು ಭಾಗವಹಿಸುತ್ತಿದ್ದ ಈ ಕಾರ್ಯಕ್ರಮ ಇದೀಗ ಹೊರ ಜಿಲ್ಲೆಗಳಿಂದ ಮಾತ್ರವಲ್ಲ. ಹೊರ ರಾಜ್ಯಗಳಿಂದಲೂ ಜನರು ಆಸಕ್ತಿಯಿಂದ ಬಂದು ಶ್ರದ್ದೆಯಿಂದ ಪೂಜಾದಿಗಳಲ್ಲಿ ಭಾಗವಹಿಸುತ್ತಿದ್ದಾರೆ.
ಭಕ್ತಿ ಶ್ರದ್ದೆಯಿಂದ ಅರ್ಚಿಸಿದ ಪರಿಣಾಮ ಅವರ ಜೀವನದಲ್ಲಿ ಒಳಿತು ಕಾಣುತ್ತಿದ್ದಾರೆ.
ಅನೇಕ ಸರ್ಕಾರಿ ಉನ್ನತ ಅಧಿಕಾರಿಗಳೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷವಾಗಿದೆ.
ಇದೀಗ ಹದಿಮೂರನೆಯ
ವರುಷದ ಕಾರ್ಯಕ್ರಮ ಪೆಬ್ರವರಿ 18 ರಂದು ಸಂಜೆ 6.33 ಗಂಟೆಗೆ ಶಿರಾ ಪಟ್ಟಣದ ಶ್ರೀಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು ಆಸಕ್ತ ಸದ್ಭಕ್ತರು ಭಾಗವಹಿಸಬಹುದಾಗಿದೆ.
ಶ್ರೀ ಶಂಕರ ಸಹಸ್ರಲಿಂಗಾರ್ಚನೆ ಸಮಿತಿಯ
ಡಾ:ಪಿ.ಸುರೇಶ್ ಶಾಸ್ತ್ರಿ ತಮ್ಮ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ
ಹಾಗೂ
ಸಹಸ್ರ ಲಿಂಗಾರ್ಚನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೆಚ್ಚಿನ ಜನಕ್ಕೆ ಅವಕಾಶವಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಲು ತಿಳಿಸಿದ್ದಾರೆ...
ವರದಿ : ಶಿರಾ ಶ್ರೀಮಂತ್.

