ಗುಬ್ಬಿಯಲ್ಲಿ ಮತ್ತೊಮ್ಮೆ ಶಾಸಕ ಶ್ರೀನಿವಾಸ್ ಆಗುವುದು ಖಚಿತ ಎಂದು ಒಕ್ಕಲಿಗ ಸಮುದಾಯದ ಕೊಪ್ಪ ವೆಂಕಟೇಶ್ ತಿಳಿಸಿದರು.
ತಾಲ್ಲೂಕಿನ ಕೊಪ್ಪ ಗ್ರಾಮ ಪಂಚಾಯತಿ ಯಲ್ಲಿ ನಡೆದ ರಸ್ತೆ ಕಾಮಗಾರಿಯಲ್ಲಿ ಮತನಾಡಿದ ಅವರು ಶ್ರೀನಿವಾಸ್ ಅವರಿಗೆ ಎಲ್ಲಾ ಸಮುದಾಯದವರು ಸಹ ಜೊತೆಗೆ ಇದ್ದಾರೆ ಒಕ್ಕಲಿಗ ಸಮುದಾಯ ಕೇವಲ ಜೆ ಡಿ ಎಸ್ ಪಕ್ಷದ ಕಡೆ ಮಾತ್ರ ಹೋಗುತ್ತಾರೆ ಎನ್ನುವುದು ಸುಳ್ಳು ಒಕ್ಕಲಿಗ ಸಮುದಾಯದ ನಾಯಕರು ಎಲ್ಲಾ ಪಕ್ಷ ದಲ್ಲೋ ಇದ್ದರೆ ಹಾಗಾಗಿ ಗುಬ್ಬಿ ಕ್ಷೇತ್ರದಲ್ಲಿ ಜಾತಿಗಿಂತ ವ್ಯಕ್ತಿಗೆ ಹೆಚ್ವಿನ ಬೆಲೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ವೀರಶೈವ ಸಮುದಾಯದ ಹರ್ಷ ಮಾತನಾಡಿ ಈ ಬಾರಿ ವೀರ ಶೈವ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀನಿವಾಸ್ ಪರವಿದ್ದುಕಾಂಗ್ರೆಸ್ ಪಕ್ಷೇದಿಂದ ಟಿಕೆಟ್ ತೆಗೆದುಕೊಂಡು ಈ ಬಾರಿ 5 ನೇ ಭಾರಿಗೆ ಆಯ್ಕೆ ಯಾಗುತ್ತರೆ ಎಂದು ತಿಳಿಸಿದರು.
ಮುಖಂಡ ಕೊಪ್ಪ ದೇವರಾಜ್ ಮಾತನಾಡಿ ಪ್ರತಿ ಸಮುದಾಯದ ಜೊತೆ ಗೆ ಶ್ರೀನಿವಾಸ್ ಅವರು ಇದ್ದರೆ 20 ವರ್ಷ ದಲ್ಲಿ ಅವರ ಸೇವೆ ಅನನ್ಯ ವಾಗಿದೆ ಎಂದು ತಿಳಿಸಿದರು.
